Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಾಯಲು ಹೊರಟವರಿಗೆ ಕೋಟಿ ಸಿಕ್ಕಾಗ.. 3/5 ***
Posted date: 02 Mon, Jan 2023 08:46:53 AM
ನಾನು ಅದು ಮತ್ತು ಸರೋಜಾ ಒಂದು ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾ. ಅನಿವಾರ್ಯವಾಗಿ ವೇಶ್ಯಾವೃತ್ತಿಗಿಳಿದ ಸರೋಜಾ, ತನಗಿರುವ ಅತಿಯಾದ ನಿದ್ದೆಯ ಖಾಯಿಲೆಯಿಂದ ಸಮಾಜದ  ತಿರಸ್ಕಾರಕ್ಕೊಳಗಾದಂಥ ಯುವಕ, ಮಗನ ಹೆಂಡತಿಯ ಉಪಟಳದಿಂದ ಬೇಸತ್ತ ಮುದುಕ  ಈ ಮೂವರ ಸುತ್ತ  ನಡೆಯುವ ಹಲವಾರು ಘಟನೆಗಳನ್ನು  ಇಟ್ಟುಕೊಂಡು ನಿರ್ದೇಶಕ ವಿನಯ್ ಪ್ರೀತಂ ಅವರು ಸಮಾಜದ ಸುಂದರವಾದ ಕಥೆಯೊಂದನ್ನು ಹೆಣೆದು ತೆರೆಮೇಲೆ ತಂದಿದ್ದಾರೆ. ಸೇತುವೆ ಮೇಲಿಂದ ಬಿದ್ದು ಸಾಯಲುಹೊರಟ ಯುವಕ ಯೋಗಿಯನ್ನು ಉಳಿಸಲು ಹೋದ ಮುದುಕನ  ತಲೆಗೆ ಪೆಟ್ಟುಬಿದ್ದು   ಗಾಯವಾಗುತ್ತದೆ. ನಂತರ ಹೋಟೆಲೊಂದರಲ್ಲಿ ಊಟ ಮಾಡುವಾಗ ಅಲ್ಲಿಗೆ ಬಂದ ಹುಡುಗ, ಹುಡುಗಿಯ ಜೊತೆ  ಸಣ್ಣ ಕಿರಿಕ್  ಆಗುತ್ತದೆ,  ಆ ಹುಡುಗಿ ಹೋಗುವಾಗ ತನ್ನ ಪರ್ಸನ್ನು ಅಲ್ಲೇ ಮರೆತು ಹೋಗಿರುತ್ತಾಳೆ. ಆ ಪರ್ಸ್ ಇವರ ಕೈಸೇರಿ  ಅದರಲ್ಲಿದ್ದ  ಬೆಲೆಬಾಳುವ ಮೊಬೈಲ್ ಹಣ ಇವರ ಪಾಲಾಗುತ್ತದೆ. ಮೊಬೈಲ್  ಮಾರಿ ಆ ಹಣವನ್ನು ಖರ್ಚು ಮಾಡುತ್ತಾರೆ.
 
ನಂತರ ಮುದುಕ ಪಾಂಡು(ದತ್ತಣ್ಣ)ಗೆ ಒಂದು ಐಡಿಯಾ ಹೊಳೆಯುತ್ತದೆ. ಆ ಹುಡುಗಿಯ ಮನೆಯವರಿಗೆ ಕಾಲ್ ಮಾಡಿ ಕೋಟಿಗಟ್ಟಲೆ ಹಣಕ್ಕೆ  ಬೇಡಿಕೆ ಇಡಬಹುದು ಎಂದು ಯೋಚಿಸುತ್ತಾರೆ.  ಈ  ನಡುವೆ ಆ ಮೊಬೈಲ್ ಅಂಗಡಿಯವನಿಂದ ಸರೋಜಾಳ (ಅಪೂರ್ವ ಭಾರದ್ವಾಜ್) ಕೈಸೇರಿರುತ್ತದೆ.  ಮೊಬೈಲ್‌ ಪಡೆಯಲು ಅವರಿಬ್ಬರೂ  ಈಕೆಯ ಬಳಿ ಬಂದಾಗ ಇವರ  ಐಡಿಯಾ ಸರೋಜಾಳಿಗೂ  ಗೊತ್ತಾಗುತ್ತದೆ,  ಆಕೆ  ಆ ಹಣದಲ್ಲಿ ತನಗೂ ಪಾಲು ಬೇಕೆಂಬ ಬೇಡಿಕೆ ಮುಂದಿಡುತ್ತಾಳೆ. ಮುಂದೆ ಆ ೨ ಕೋಟಿ ಹಣ  ಈ ಮೂವರ ಕೈ ಸೇರಿತೇ,  ಅಥವಾ  ಪ್ರೆಮಿಯ ಸೋಗುಹಾಕಿ ಹುಡುಗಿಯನ್ನು  ಕರೆದುಕೊಂಡು ಬಂದಿದ್ದ ಯುವಕನ ಕೈ ಸೇರಿತೇ  ಎನ್ನುವುದೇ  ನಾನು ಮತ್ತು ಸರೋಜಾ ಚಿತ್ರದ ಕ್ಕೆ ಮ್ಯಾಕ್ಸ್.  ಲೂಸ್‌ಮಾದ ಯೋಗಿ ನಾಯಕನ ಪಾತ್ರದಲ್ಲಿ ಸಹಜವಾದ ಅಭಿನಯ ನೀಡಿದ್ದಾರೆ. ಹಿರಿಯನಟ ದತ್ತಣ್ಣ ಅವರು ಚಿತ್ರದಲ್ಲಿ ಘಾಟಿ ಮುದುಕನಾಗಿ ಇಷ್ಟವಾಗುತ್ತಾರೆ. ಇನ್ನು ವೇಶ್ಯೆಯ ಪಾತ್ರವನ್ನು  ಧೈರ್ಯವಾಗಿ ನಿರ್ವಹಿಸಿರುವ  ಅಪೂರ್ವ  ಬಾರದ್ವಾಜ್ ಅವರಿಗೆ ಮೆಚ್ಚಲೇಬೇಕು.  ಅವರು ವೇಶ್ಯೆಯ  ಪಾತ್ರವನ್ನು  ಸಹಜವಾಗಿ ಅಭಿನಯಿಸುವ  ಮೂಲಕ  ಪೇಕ್ಷಕರ ಗಮನ ಸೆಳೆಯುತ್ತಾರೆ,  ಈ ಮೂರು ಪಾತ್ರಗಳ ಜೊತೆಗೆ  ಅದು ಯಾವಾಗಲೂ ಇರುತ್ತದೆ ಎಂದು ಕುತೂಹಲ ಮೂಡಿಸಿದ್ದ  ನಿರ್ದೇಶಕರು ಅದು ಎಂದರೆ  ಹಣದ ಗಂಟು ಎಂಬುದನ್ನು ಕೊನೆಯವರೆಗೆ ಕಾಪಾಡಿಕೊಂಡು ಬಂದಿದ್ದರು. ಚಿತ್ರದ ನಿರೂಪಣೆ, ಕಥೆಗೆ  ತಕ್ಕಂತೆ ಪಾತ್ರಗಳ ಪೋಷಣೆ  ಮಾಡಿರುವುದು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ, ನಿರ್ದೇಶಕರ ಕಲ್ಪನೆಯ  ಕಥೆಗೆ ಜೀವ ತುಂಬುವವರು ಕಲಾವಿದರು. ಎಲ್ಲರೂ  ತಂತಮ್ಮ  ಪಾತ್ರಗಳನ್ನು ಅಚ್ಚುಕಟ್ಟಾಗಿ  ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು  ಸಂಗೀತ ಕೇಳುವಂತಿದೆ. ಬಹುತೇಕ ಕಥೆ  ರಾತ್ರಿಯಲ್ಲೇ ನಡೆಯುವುದರಿಂದ ಕ್ಯಾಮೆರಾ ಕೆಲಸ ಬಹುಮುಖ್ಯ ವಾಗಿರುತ್ತದೆ.  ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಾಯಲು ಹೊರಟವರಿಗೆ ಕೋಟಿ ಸಿಕ್ಕಾಗ.. 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.